Monday, 22 August 2016

ರಾಜಾ ಹಂಡೆ ಮಲಕಪ್ಪನಾಯಕ

ರಾಜಾ ಹಂಡೆ ಮಲಕಪ್ಪ ನಾಯಕ ಬಹು ಶೂರನು, ವೀರ ಪರಾಕ್ರಮಿ, ಈ ರಾಜ ಸಮರ್ಥ ಆಡಳಿತಗಾರ ..

ಒಬ್ಬ ರಾಜನ ಆಡಳಿತವು ಎಷ್ಟು ಸಮರ್ಥವಾಗಿರುತ್ತಿತ್ತೊ ಅಷ್ಟೆ ಭೂಕಂದಾಯವು ಆ ರಾಜ್ಯಕ್ಕೆ ಸಂಗ್ರಹವಾಗಿರುತ್ತಿತ್ತು...

ಬ್ರಿಟಿಷ್ ಅಧಿಕಾರಿ ಕರ್ನಲ್ ಮನ್ರೋ ಸಾಹೇಬರ ಪ್ರಕಾರ ಹಂಡೆ ಮಲಕಪ್ಪ ನಾಯಕನ ಕಾಲದಲ್ಲಿ ಬಳ್ಳಾರಿ, ಆಂಧ್ರದ ಅನಂತಪೂರ ಅರ್ಧ ಮಂಡಲದ ಅರ್ಧ ಭಾಗವೂ ಈ ರಾಜನ ಸ್ವಾಧೀನದಲ್ಲಿದ್ದು ಮತ್ತು ಈ ಭಾಗದ ಭೂಕಂದಾಯವು ರೂ.1,37,316 (ಒಂದು ಲಕ್ಷ ಮೂವತ್ತೆಳು ಸಾವಿರದ ಮೂರುನುರ ಹದಿನಾರು) ಇತ್ತೆಂದು ಅಂತರಾಷ್ಟ್ರಿಯ ಖ್ಯಾತ ಸಂಶೊಧಕ ಸಿ.ಪಿ.ಬ್ರೌನ್ ತನ್ನ ಲೇಖನದಲ್ಲಿ ಹೇಳಿದ್ದಾನೆ....

ಕ್ರಿಶ.1603 ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದೆ ಗ್ರಾಮದ ಸಮೀಪದಲ್ಲಿರುವ ಅರಳಿಹಳ್ಳಿ ಬೇಚಿರಾಕ ಗ್ರಾಮದಲ್ಲಿನ ಶಿಲಾಶಾಸನವು 28 ಸಾಲುಗಳಿದ್ದು "ರಾಜಾಧಿರಾಜ ರಾಜಶ್ರೀ ಹಂಡೆ ಮಲಕಪ್ಪ ನಾಯಕರು ಸಜ್ಜನ ಶುದ್ಧ ಶಿವಾಚಾರ ಸಂಪನ್ನನಾದ ಬೆಂಡೆಗೆರೆಯ ಸಿದ್ದವೀರಂಣ ದೇವನಾದ ಶಿಷ್ಯ ಸಿದ್ದರಾಮದೇವನಿಗೆ  ಶ್ರೀಶೈಲ ಪಾತಾಳ ಗಂಗೆಯಲ್ಲಿ ಮಿಂದು ಹಿರಿಯರಿಗೆ ಸುಕ್ರತವಾಗಲೆಂದು ಅರೆಯಹಳ್ಲಿಯ ಗ್ರಾಮವನ್ನು ಪುರವರ್ಗವಾಗಿ ದಾನ ನೀಡುತ್ತಾನೆ ರಾಜಾ ಹಂಡೆ ಅರಸ".......

ಭಟಾಂಗಿನಿ ಸಾಹಿತ್ಯದಲ್ಲಿ ಈ ಹಂಡೆ ವಂಶದ ಮನೆತನದವರು "ಪಂಚಕಾವ್ಯ ಪುರಾಣ ಶಾಸ್ತ್ರಾಜ್ಙನಾ ಗುರುತಾದ ಭಾಷಾ ವೀಶೇಷ ಸರ್ವಗ್ನನಂ" ಎಂದು ಪ್ರಶಂಸಿಸಿರುತ್ತಾರೆ...

  ರಾಜಾ ಹಂಡೆ ಮಲಕಪ್ಪ ನಾಯಕನ ಸ್ಥಾನದಲ್ಲಿ ರಚನೆಯಾದ ಕ್ರತಿ "ಹಂಡೆ ಮಲುಕನೊಡೆಯ ಕೇಳು ಎಲೆ ತಂಗಿ ಆತ ಉಂಡ ಮನೆಗೆ ಎರಡ ಬಗೆಯನಲೆ ತಂಗಿ...
ಉಂಡು  ನಾವು ಸುಖದೊಳಲೆ ತಂಗಿ... ಶಿವನ ಕೊಂಡಾಡುವ ಜಗಳಬೇಡ ಎಲೆ ತಂಗಿ .." ಎಂದು ಸಾಂಧರ್ಬಿಕವಾಗಿ ಹಂಡೆ ಮಲಕಪ್ಪ ನಾಯಕನ ಶಿವಭಕ್ತಿಯನ್ನು ಕವಿ ಇಲ್ಲಿ ತಿಳಿಸುತ್ತಾನೆ.

ಈ ರಾಜನ ಆಸ್ಥಾನದಲ್ಲಿ ಸಾಹಿತ್ಯವನ್ನು ಆಶ್ರಯ ನೀಡಿ, ಕಾವ್ಯಧರ್ಮವನ್ನು, ರಾಜಧರ್ಮವನ್ನೂ, ಮೆರೆದಿರುವುದು ಮಹತ್ವದ ವಿಷಯವೆಂದು ಕವಿ ವರ್ಣಿಸುತ್ತಾನೆ.........

ಈ ರಾಜನ ಕಾಲದಲ್ಲಿ ಬಳ್ಳಾರಿಯ ನಾಡು ಸಂಪತ್ತ ಭರಿತವಾಗಿ, ಪ್ರಜೆಗಳು ಸುಖದಿಂದ ಬಾಳುತ್ತಿರಲಾಗಿ, ಬಳ್ಳಾರಿಯ ಶ್ರೀ ಸಂಗಮೇಶ್ವರ ದೇವರ ಜಾತ್ರಾ ಸಮಯದಲ್ಲಿ ಮಲಕಪ್ಪ ನಾಯಕನು ಭಾಗಿಯಾಗಿ...
ಪಲ್ಲಕ್ಕಿ ಉತ್ಸವದಲ್ಲಿ ಈ ಅರಸ ರಾಜನಾಗಿರುವುದನ್ನು ಗಮನಿಸಿ ಪ್ರಜೆಗಳೆಲ್ಲರೂ ಹರ್ಷದ್ದಾರದಿಂದ ಈ ರಾಜನಿಗೆ ವಿನಮ್ರ ಭಕ್ತಿಯಿಂದ ನಮಸ್ಕರಿಸಿ ಈ ರಾಜನನ್ನು ಕೊಂಡಾಡಿದರು. ..........

ಆಂಧ್ರದ ಅನಂತಪುರ ಹತ್ತಿರ ಬುಕ್ಕಪಟ್ಟಣ ವೆಂಬ ರಾಜ್ಯವನ್ನು ಈ ಅರಸ ಆಳುತ್ತಿರಲು ವಿದ್ಯಾನಗರದ ಅಧಿಪತಿ ತಿರುಮಲರಾಯರ ಮಗನು ಶ್ರೀರಂಗರಾಯ ಚಂದ್ರಗಿರಿ ಕಡೆ ರಾಜ್ಯ ವಿಚಾರಣ ಮಾಡಲಿಕ್ಕೆ ಹೋಗಿರಲಾಗಿ, ಬಾದುಷಾಹಗಳ ಸೈನ್ಯವು, ವಿದ್ಯಾನಗರವನ್ನು ಆಕ್ರಮಿಸಬೇಕೆಂದು ಬಂದು ಕಲ್ಯಾಣ ಕಲಬುರ್ಗಿ ಪ್ರಾಂತ್ಯದಲ್ಲಿಳಿಯಿತು, ಈ ವರ್ತಮಾನವನ್ನು ಶ್ರೀರಂಗರಾಯರು ಕೆಳಿ ತಾನು ವಿದ್ಯಾನಗರವನ್ನು ಮುಟ್ಟಿ, ಅಲ್ಲಿದ್ದ ಸೈನ್ಯ ಸಮೇತ ಕಲ್ಯಾಣ ಕಲಬುರ್ಗಿ ಪ್ರಾಂತ್ಯಕ್ಕೆ ಬಂದು ಬುಕ್ಕರಾಯ ಪಟ್ಟಣದ ಹಂಡೆ ಮಲಕಪ್ಪ ನಾಯಕನಿಗೆ ನೀನು ಎಲ್ಲಾ ಸೈನ್ಯ ಸಮೆತವಾಗಿ ಬಾ ಎಂದು  ಕರೆಸಿಕೊಂಡು ಹೋಗಿ ಬಾದುಷಾಹಗಳ ಮೆಲೆ ಯುದ್ಧವನ್ನು ಮಾಡಿ ಪರಾಜಿತ ಗೊಳಿಸಿದರು...

ತರುವಾಯ ಈ ಹಂಡೆ ಮಲಕಪ್ಪ ನಾಯಕನು ಬುಕ್ಕಪಟ್ಟಣಕ್ಕೆ ಮುಟ್ಟಿ ಹೊಸದಾಗಿ ಪೇಟೆ ಕಟ್ಟಿಸಿ ರಾಜ್ಯ ಪರಿಪಾಲನೆ ಮಾಡುತ್ತಾ ಇರಲಾಗಿ ಮತ್ತೆ ವಿದ್ಯಾನಗರಕ್ಕೆ ಆ ಬಾದುಷಾಹಗಳ ಸೈನ್ಯ ಸಮೇತ ಬಂದು ಯುದ್ದಮಾಡಿದರು. ಆ ಯುದ್ಧದೊಳಗೆ ಶ್ರೀರಂಗರಾಯ ನಿರ್ವಾಹ ಮಾಡಲಾರದೆ ಅವರ ಕೈಗೆ ಸಿಕ್ಕಿದುದರಿಂದ ಬಾದುಷಾಹಗಳು ಪೆನಗೊಂಡ ಇದಕ್ಕೊಳಪಟ್ಟಿರುವ ಸರ್ವರಾಜ್ಯವು ತಮ್ಮ ಸ್ವಾಧೀನ ಮಾಡಿಕೊಂಡರು...

ಆಮೇಲೆ ಮಲಕಪ್ಪನಾಯಕನು ಶ್ರೀರಂಗರಾಯರ ವರ್ತಮಾನವನ್ನು ಕೇಳಿ ಮುಸ್ಲಿ೦ ಅರಸರು ಪ್ರಬಲರಾದರು...

(ಬಹುಮನಿ ಸಾಮ್ರಾಜ್ಯದ ಐದು ಮುಸ್ಲಿಂ ಅರಸರು) ಇನ್ನು ಮೇಲೆ ರಾಜ್ಯ ಕಾರ್ಯವ ಮಾಡಿದರೆ ಚೆನ್ನಾಗಿಲ್ಲವೆಂದು ತಿಳಿದು ಬಾದುಷಾಹಗಳ ಮೆರೆಗೆ ನಡೆದುಕೊಳ್ಳುತ್ತಾ ಬಂದನು ಈ ಹಂಡೆ ಮಲಕಪ್ಪ ನಾಯಕ. ಈ ಮಲಕಪ್ಪ ನಾಯಕನ ರಾಜ್ಯ ಕಾರ್ಯವೈಕರಿ ನೊಡಿ ನೀನು ಅಪ್ರತಿಮ ಶೂರ, ವೀರ, ಎಂದು ಗೌರವಿಸಿ "ಬಾದುಷಾಕ ವಜೀರ್ "
(Royal Minister)
ಎಂಬ ಪದವಿ ನಿಡಿ ರಾಯರು ಕೊಟ್ಟ ಎಲಮಂಚಿನಾಡಿಗೆ ಸಲ್ಲುವ ಎಲ್ಲ ಪ್ರದೇಶಗಳನ್ನು ಮರಳಿ ರಾಜ್ಯ ಕಾರ್ಯಕ್ಜೆ ದಯೆಪಾಲಿಸಿದರು....

 ಆನಂತರ ಹಂಡೆ ಮಲಕಪ್ಪ ನಾಯಕ ಬುಕ್ಕಪಟ್ಟಣಕ್ಕೆ ಮುಟ್ಟಿ, ತನಗೆ ಪುತ್ರ ಸಂತಾನವಿಲ್ಲವೆಂಬ ಚಿಂತೆಯಿಂದ ಒಂದು ದಿವಸ ಪಡುವಲು ಇದ್ದ ಕಡೆಗೆ ಅನಂತಪುರಕ್ಕೆ ಹೊಗಿ ಅಲ್ಲಿದ್ದ ಎಲ್ಲಾ ರೆಡ್ಡಿ ಜನಾಂಗದ ಮುಖ್ಯಸ್ಥರು ನಮ್ಮ ಧಣಿ ಬಂದರೆಂದು ನಿವು ನಮ್ಮ ನಮಗೆ ಬಂದು ಅತಿಥಿ ಸತ್ಕಾರ ಸ್ವೀಕರಿಸಬೇಕೆಂದು ಎಲ್ಲರೂ ವಿನಮ್ರಿಸಿದಾಗ ಚಿನ್ನಪ್ಪರೆಡ್ಡಿ ಮನೆಗೆ ಹೊಗಿ ನಿಮ್ಮ ಮನಸ್ಸಿನಲ್ಲಿ ಏನಿದೆ ಧಣಿ ಅದು ನೇರವೇರುತ್ತೆ ಅಂತ ಹೇಳಿದಾಗ ಅವರ ಕೈಯಲ್ಲಿ ತಾಂಬೂಲ ಇಸಿದುಕೊಂಡು ಮರಳಿ ತನ್ನ ರಾಜ್ಯಕ್ಕೆ ಹೊಗಿ ತನ್ನ ಹೆಂಡತಿ ರಾಣಿ ಸಿದ್ದರಾಮಮ್ಮನವರಿಗೆ ವಿಷಯ ತಿಳಿಸಿದ.

 ಮರುದಿವಸ ಅನಂತಪುರದಲ್ಲಿರುವ ಎಲ್ಲಾ ರೆಡ್ಡಿ ಜನಾಂಗದವರನ್ನು ಬರಹೆಳಿಮಾಡಿ ಅವರಿಗೆ ನೀವು ಇರುವ ಸ್ಥಳ ನಮಗೆ ಬೇಕಾಗಿದೆ ಎಂದೂ ಕೆಳಲಾಗಿ, ಅವರು ಧಣಿ ನಿವು ಕೊಟ್ಟ ಸ್ಥಳ ನಿಮಗೆ ಕೊಡುವುದಕ್ಕೆ ನಮ್ಮ ಅಭ್ಯಂತರ ಏನು ಇಲ್ಲ ಧಣಿ ದಯಮಾಡಿಸಿ ಎಂದು ವಿನಮ್ರದಿಂದ ಹೆಳಿದರು......

ಆನಂತರ ವಸ್ತ್ರ ತಾಂಬೂಲ ಬಹುಮಾನಗಳನ್ನು ಅವರಿಗೆ ಕೊಟ್ಟು ಕಳುಹಿಸಿ ಅನಂತಪುರದಲ್ಲಿ ಒಂದು ಅರಮನೆಯನ್ನು ಕಟ್ಟಿಸಿದ ಈ ಹಂಡೆ ಮಲಕಪ್ಪ ನಾಯಕ ಅಂದಿನಿಂದ "ಹಂಡೆ ಅನಂತಪುರ" ಎಂದು ನಾಮಧೇಯವಾಯಿತು..

ರಾಣಿ ಸಿದ್ದರಾಮಮ್ಮನವರಿಗೆ ನಾಲ್ವರು ಮಕ್ಕಳುಂಟಾದರು.....

26 comments:

  1. Hande Malakappa Nayak belongs to veerashaiv Lingayat Hande Vazir Caste

    ReplyDelete
  2. Hande Malakappa Nayak was Son of Hande Hanumappa Nayak

    ReplyDelete
  3. Anantapur and Bellary Dynasty Hande Hanumappa Nayak and Hande Malakappa Nayak Kings belongs to veerashaiv Lingayat Hande Vazir Community

    ReplyDelete
  4. ಹಂಡೆ ಮಲಕಪ್ಪನಾಯಕನು ಹಂಡೆ ಹನುಮಪ್ಪನಾಯಕನ ಮಗ ಈ ಅರಸನಿಂದ ಆಂದ್ರಪ್ರದೇಶದ ಅತಿ ದೊಡ್ಡ ಜಿಲ್ಲೆ ಹಂಡೆ ಅನಂತಪೂರ ಎಂದು ನಾಮಧೆಯವಾಯಿತು

    ReplyDelete
  5. ಹಂಡೆ ಮಲಕಪ್ಪನಾಯಕನು ವೀರಶೈವ ಲಿಂಗಾಯತ ಹಂಡೆ ವಜೀರ್ ಜನಾಂಗದವನು

    ReplyDelete
  6. Hande dynasty belongs to first Shaiva ...thereafter.. Veerashaiv...The 12th century under lord basava...they adopted Hande Lingayat...then 16 Century...from title had got Bijapur Sultan *Badashaha Vazir*

    ReplyDelete
  7. ಹಂಡೆ ಮಲಕಪ್ಪನಾಯಕ ನು ಅಪ್ರತಿಮ ಶೂರ,ರಾಜಾ

    ReplyDelete
  8. ರಾಜ ವೀರ ಪಾಳೆಗಾರ ಹಂಡೆ ಮಲಕಪ್ಪನಾಯಕ ವೀರಶೈವ ಲೀಂಗಾಯತ ಹಂಡೆ ವಜೀರ್ ಸಮುದಾಯ ದವರು

    ReplyDelete
  9. ರಾಜ ವೀರ ಹಂಡೆ ಮಲಕಪ್ಪನಾಯಕ

    ReplyDelete
  10. ರಾಜಾ ಹಂಡೆ ಮಲಕಪ್ಪನಾಯಕನಿಂದ ಈಗಿನ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಮೊದಲಿನ ಹೆಸರು ಹಂಡೆ ಅನಂತಪೂರಂ

    ReplyDelete
  11. ಹಂಡೆ ಮಲಕಪ್ಪನಾಯಕ ವೀರಶೈವ ಲಿಂಗಾಯತ ಹಂಡೆ ವಜೀರ್ ಸಮಾಜದವನು

    ReplyDelete
  12. ಶಾಸನಗಳಲ್ಲಿ... ವಜೀರ.... ಹಾಗೂ ವೀರಶೈವ ಸಜ್ಜನ ಶುದ್ದ....ದಾನಪತ್ರಗಳಲ್ಲಿ ವೀರಶೈವ ಸಂಪನ್ನರಾದ ರಾಜ ಹಂಡೆ ಹನುಮಪ್ಪನಾಯಕ ಅಂತ ದಾಖಲಗಿದೆ

    ReplyDelete
  13. Lingayat Hande Vazir Palegar Hande Malakappa Nayaka was son of Hande Hanumappa Nayaka

    ReplyDelete
  14. I want more information about Hanumappanyaka.
    I m searching plz help me

    ReplyDelete
  15. Hande vajira caste gowda caste yeradu vandena ....lingayat veerashaiva hande vajira 2vandena ma

    ReplyDelete
  16. ನಮ್ಮ ಸಮಾಜದ ಎಲ್ಲ ಬಂಧುಗಳಿಗೆ ಮಾಹಿತಿ ತಿಳಿಸುವುದು ಒಂದು ಮುಖ್ಯ ಉದ್ದೇಶ ವಾಗಿತ್ತು Sir nimm whatsapp number kalasiri nann number 9611792171 only hande vazir

    ReplyDelete
  17. This comment has been removed by the author.

    ReplyDelete